ಈ ಕಾಂಕ್ರೀಟ್ ಬದುಕಿನ ಮಧ್ಯೆ, ಹಾಳು ಮೂಳು ತಿಂದು ಬದುಕುತ್ತಿರೋ ನಮ್ಮಂಥ ಸಾಫ್ಟವೇರ ಉಗ್ಯೋಗಿಗಳಿಗೆ ಎರಡು ಮೂರು ನಿಮಿಷ ಕುಂತುಕೊಂಡು ಮಾತನಾಡೋದಕ್ಕೆ ಸಮಯ ಎಲ್ಲಿದೆ ಹೇಳಿ... ಈ ಮೊಬೈಲ್ ಕಂಪನಿಗಳಿಗೆ ಸಾಫ್ಟವೇರ ಉಗ್ಯೋಗಿಗಳು ಅಂದರೆ ಪಂಚಪ್ರಾಣ. ಯಾಕಂದ್ರೆ ಅವರಿಗೆ ಪ್ರಾಫಿಟ ತಂದು ಕೊಡುವವರೇ ಇವರುಗಳು. ಯಾವನೋ ಒಬ್ಬವನು ಬಸ್ನಲ್ಲಿ ಹೇಳ್ತಿದ್ದ, ನನಗೆ ನನ್ನ ಹೆಂಡತಿ ಮಕ್ಕಳು ಜೊತೆ ಕಾಲ ಕಳೆಯೋಕೆ ಸಮಯ ಸಿಗ್ತಿಲ್ಲ, ಅದಕ್ಕೆ ಸನ್ಯಾಸಿಯಾದರೆ ಯಾವ ತೊಂದರೆಗಳು ಇರಲ್ಲ ಅಂತೆ. ಅದಕ್ಕೆ ಅಲ್ಲೇ ಪಕ್ಕದಲ್ಲೇ ಕುಂತಿದ್ದ ಹಿರಿಯರೊಬ್ಬರು ಉದಾಹರಣೆಗೆ ಒಂದು ಸಣ್ಣ ಕಥೆ ಹೇಳಿದ್ರು. ಆ ಕಥೆ ಹೀಗಿದೆ.
ಒಂದೂರಲ್ಲಿ ಒಬ್ಬ ಸಣ್ಣ ಪ್ರಮಾಣದ ವ್ಯಾಪಾರಸ್ಥ ಹೇಗೋ ಸ್ವಲ್ಪ ದಿವಸದಲ್ಲಿ ಕಷ್ಟ ಪಟ್ಟು ಸಿಕ್ಕಾಪಟ್ಟೆ ದುಡ್ಡು ಗಳಿಸಿದ. ದಿನೇ ದಿನೇ ಅವನ ಲಾಭ ಹೆಚ್ಚುತ್ತ ಹೋಯಿತು. ಸ್ವಲ್ಪ್ಪ ದಿವಸದಲ್ಲಿ ಅವನು ಊರಿಗೆ ಸಾಹುಕಾರನಾದ. ಅವನಿಗೆ ಕಿಂಚಿತ್ತು ವೇಳೆ ಸಿಗ್ಥಿರ್ಲಿಲ್ಲ ತನ್ನ ಹೆಂಡತಿ ಮತ್ತು ಮಕ್ಕಳ ಜೊತೆ ಸುಖವಾಗಿ ಇರೋದಕ್ಕೆ. ದಿನಗಳು ಸಾಗ್ಹ್ತ ಇದ್ದವು, ಅವನಿಗೆ ಹೆಂಡತಿ ಮತ್ತು ಮಕ್ಕಳ ಬಗ್ಗೆ ಕಾಳಜಿನೆ ಹೊರಟ್ಹೋಯ್ಹ್ತು. ಅವನಿಗೆ ಜೀವನದಲ್ಲಿ ಎಲ್ಲವು ಇತ್ತು ಆದರೆ ಸುಕವಿರಲಿಲ್ಲ. ಅದೇ ಯೋಚನೆಲಿ ಅವನು ಮುಳುಗಿರುವಾಗ ವ್ಯಾಪಾರದ ಕಡೆಗಿನ ಮೋಹ ಹೊರಟ್ಹೋಯ್ಹ್ತು. ವ್ಯಾಪಾರದಲ್ಲಿ ಸಿಕ್ಕಾಪಟ್ಟೆ ನಷ್ಟ ಅನುಬವಿಸಿದ, ಮರಳಿ ಅದೇ ಸ್ತಿಥಿಯಲ್ಲಿ. ನಂತರ ಅವನಿಗೆ ತಿಳಿದಿದ್ದು ದುಡ್ಡೇ ಎಲ್ಲವೂ ಅಲ್ಲ ಜೀವನದಲ್ಲಿ, ನಮ್ಮ ಸುಖ ಸಂತೋಷ ಇರೋದು ನಮ್ಮ ತಂದೆ, ತಾಯಿ, ಹೆಂಡತಿ ಮಕ್ಕಳ ಜೊತೆಯಲ್ಲಿ ಇರೋದ್ರಿಂದ.
ದುಡ್ಡು ಬೇಡ ಅಂಥಾ ಹೇಳತಾ ಇಲ್ಲ, ದುಡ್ಡೇ ಜೀವನದಲ್ಲಿ ಎಲ್ಲಾ ಅಲ್ಲ. ನಿಮ್ಮ ನೆಚ್ಚಿನವರ ಜೊತೆ ಸ್ವಲ್ಪ ಕಾಲ ಕಳೆಯಿರಿ. ನಿಮಗೂ ನೆಮ್ಮದಿ ಸಿಗುತ್ತದೆ ಮತ್ತು ನಿಮ್ಮ ನೆಚ್ಚಿನವರು ಕೂಡ ಖುಷಿಯಾಗಿರ್ತಾರೆ. ದಯವಿಟ್ಟು ದುಡ್ಡಿನ ಮೋಹ ಬಿಟ್ಟು ಬಿಡಿ. ಯಾರೋ ಹೇಳಿದ್ದು ನೆನಪು,
"ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ".
ಇಂತಿ ನಿಮ್ಮ,
ರವಿಕುಮಾರ
